‘ಆಯುಧ ಪೂಜೆಗೆ ಹೋಲಿಸಿದರೆ ಈ ಹಬ್ಬದಲ್ಲಿ ಹೆಚ್ಚಿನ ಕಸ ಸಂಗ್ರಹ ಆಗುವುದಿಲ್ಲ. ಬೂದುಗುಂಬಳಕಾಯಿ, ಹೂವು, ಪೂಜಾ ಸಾಮಗ್ರಿ ಹಾಗೂ ಪಟಾಕಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಬೂದುಗುಂಬಳಕಾಯಿ 15 ದಿನಗಳಲ್ಲಿ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಆದರೆ, ಬಾಳೆ ದಿಂಡು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆ’ ಎಂದರು.