ಮೈಸೂರು: ನಗರದ ಬಿಜಿಎಸ್ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರ ಹೃದಯ ಹಾಗೂ ಶ್ವಾಸಕೋಶವನ್ನು ಗುರುವಾರ ವಿಶೇಷ ವಿಮಾನದಲ್ಲಿ ಚೆನ್ನೈಗೆ ರವಾನಿಸಿ, ಅಲ್ಲಿನ ಇಬ್ಬರು ರೋಗಿಗಳಿಗೆ ಜೋಡಿಸಲಾಗಿದೆ.
ನಸುಕಿನ 5.25ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನವು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆಸ್ಪತ್ರೆಯ ನಾಲ್ವರು ವೈದ್ಯರ ತಂಡವು ಶ್ವಾಸಕೋಶ ಹಾಗೂ ಹೃದಯದೊಂದಿಗೆ ಸಿದ್ಧವಾಗಿತ್ತು.
ವಿಮಾನ ಹತ್ತಿದ 20 ನಿಮಿಷದಲ್ಲೇ ಚೆನ್ನೈಗೆ ತಲುಪಿದ ವೈದ್ಯರ ತಂಡವು, ಅಲ್ಲಿನ ಗ್ಲೋಬಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನೂರ್ ಅಹಮ್ಮದ್ ಹಾಗೂ ಮುಖೇಶಕುಮಾರ್ ಪಾಟೀಲ ಎಂಬುವವರಿಗೆ ಅಂಗಾಂಗಗಳನ್ನು ಜೋಡಿಸಿತು.