‘ವ್ಯಕ್ತಿಗಳನ್ನು ಕೊಲ್ಲಲು ಅವರ ಎದೆಗೆ ಒಂದರ ಹಿಂದೆ ಒಂದರಂತೆ ಎರಡು ಗುಂಡುಗಳನ್ನು ಹೊಡೆದು ಕೊಲ್ಲುವುದನ್ನು ಡಬಲ್ ಟ್ಯಾಪ್ ಎನ್ನುತ್ತಾರೆ. ಮೋದಿ ಮತ್ತವರ ತಂಡ ಇದೇ ರೀತಿ ಕೆಲಸ ಮಾಡುತ್ತಿದೆ. ಮೊದಲು ನೋಟು ರದ್ದತಿಯ ಗುಂಡು ಹೊಡೆದರು, ಢಮಾರ್. ಆನಂತರ ಜಿಎಸ್ಟಿಯ ಗುಂಡು ಹೊಡೆದರು, ಢಮಾರ್. ನಮ್ಮ ಆರ್ಥಿಕತೆ ಕುಸಿದು ಬಿತ್ತು. ದೇಶದ ಉದ್ದಿಮೆ ವಲಯ ಕುಸಿತದ ಹಾದಿ ಹಿಡಿದಿದೆ. ಆದರೆ ಹಣಕಾಸು ಸಚಿವ ಅರುಣ್ ಜೇಟ್ಲಿ ದಿನ ಬಿಟ್ಟು ದಿನ ಟಿವಿ ವಾಹಿನಿಗಳ ಎದುರು ಹೋಗುತ್ತಾರೆ. ‘ಎಲ್ಲವೂ ಉತ್ತಮವಾಗಿದೆ’ ಎಂದು ಹೇಳುತ್ತಾರೆ’ ಎಂದು ರಾಹುಲ್ ಲೇವಡಿ ಮಾಡಿದರು.