ಎಲ್ಲ ಸಮಾಜದವರು ಭಾಗಿ: ಸುತ್ತಮುತ್ತಲಿನ ಗ್ರಾಮಗಳಿಂದ ತಯಾರಿಸಿದ ಪ್ರತಿಕೃತಿಗಳನ್ನು ಮೆರವಣಿಗೆ ಮೂಲಕ ಅಮದಳ್ಳಿಗೆ ತಂದು, ಅಲ್ಲಿನ ನಾರಾಯಣ ದೇವಸ್ಥಾನದ ಮೈದಾನದಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ಅದರ ಅಣಕು ಪ್ರದರ್ಶಿಸಲಾಯಿತು. ಇದರ ವೀಕ್ಷಣೆಗೆ ಜಿಲ್ಲೆಯ ನಾನಾ ಭಾಗಗಳಿಂದ ಜನ ಆಗಮಿಸಿದ್ದರು. ಇದು ಕೇವಲ ಹಾಲಕ್ಕಿ ಸಮಾಜದವರಿಗಷ್ಟೇ ಮೀಸಲಿಲ್ಲದೇ, ಕೋಮಾರಪಂಥ, ಪಡ್ತಿ, ಆಗೇರ ಸೇರಿದಂತೆ ಹಲವಾರು ಸಮಾಜದವರು ಸಂಪ್ರದಾಯದಂತೆ ಆಚರಣೆ ಮಾಡುತ್ತಿದ್ದಾರೆ.