ಪ್ರತಿ ಸಂಜೆ ದೇವಸ್ಥಾನದ ಬಾಗಿಲು ಮುಚ್ಚಿದ ನಂತರ ಬಂದು ಅನ್ನದಾಸೋಹದ ಅಳಿದುಳಿದ ಅನ್ನ, ಬಾಳೆಎಲೆ ಹಾಗೂ ತರಕಾರಿಗಳನ್ನು ತಿನ್ನುತ್ತಿದ್ದ ಆನೆ, ಕೆಲವು ದಿನಗಳಲ್ಲಿ ಹಗಲಿನ ವೇಳೆಯೂ ದೇವಸ್ಥಾನದ ಸುತ್ತಮುತ್ತ ಸುಳಿದಾಡುತ್ತಿರುವುದು ಸುದ್ದಿಯಾಗಿತ್ತು. ದೇವಸ್ಥಾನದ ಎದುರು ನಿಲ್ಲುವ ಆನೆ, ಪ್ರಸಾದ ನೀಡುವವರೆಗೂ ಕದಲದಿರುವುದು ಭಕ್ತರ ಅಚ್ಚರಿಗೆ ಕಾರಣವಾಗಿದೆ.