<p><strong>ನವದೆಹಲಿ: </strong>ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ ಗುಹಾ ದೇವಾಲಯದಲ್ಲಿ ಮಂತ್ರಘೋಷ, ಭಜನೆ ಮಾಡಲು ನಿರ್ಬಂಧ ವಿಧಿಸಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ಜಿಟಿ) ಸ್ಪಷ್ಟಪಡಿಸಿದೆ.</p>.<p>ಗುಹಾ ದೇವಾಲಯದ ಇಡೀ ಪ್ರದೇಶವನ್ನು ‘ನಿಶ್ಯಬ್ದ ವಲಯ’ ಎಂದು ಘೋಷಿಸುವ ಉದ್ದೇಶ ಹೊಂದಿಲ್ಲ. ಅಲ್ಲದೇ ಅಂತಹ ಘೋಷಣೆಯನ್ನೂ ಮಾಡಿಲ್ಲ ಎಂದು ಎನ್ಜಿಟಿ ಸ್ಪಷ್ಟಪಡಿಸಿದೆ.</p>.<p>ಯಾವುದೇ ವ್ಯಕ್ತಿಗಳು ಅಥವಾ ಭಕ್ತರು, ಶಿವಲಿಂಗದ ಮುಂಭಾಗದಲ್ಲಿ ನಿಶ್ಯಬ್ದ ಕಾಪಾಡಬೇಕು ಎಂಬ ನಿರ್ಬಂಧವನ್ನು ಮಾತ್ರ ವಿಧಿಸಲಾಗಿದೆ. ಇದನ್ನು ಹೊರತುಪಡಿಸಿದರೆ ದೇವಾಲಯದ ಮೆಟ್ಟಿಲುಗಳೂ ಸೇರಿದಂತೆ ಯಾವುದೇ ಭಾಗಕ್ಕೆ ಸಂಬಂಧಿಸಿದಂತೆ ನಿರ್ಬಂಧ ವಿಧಿಸಿಲ್ಲ ಎಂದು ಅದು ಗುರುವಾರ ತಿಳಿಸಿದೆ.</p>.<p>ಪವಿತ್ರ ಗುಹಾ ದೇವಾಲಯದ ಬಳಿಯ 30 ಮೆಟ್ಟಿಲುಗಳ ಆಚೆಗೆ ಯಾರೂ ಏನನ್ನೂ ಕೊಂಡೊಯ್ಯಬಾರದು. ಅದು ಸದ್ಯ ಜಾರಿಯಲ್ಲಿರುವ ದೇವಾಲಯ ಮಂಡಳಿಯ ಈ ಹಿಂದಿನ ನಿಯಮವೇ ಆಗಿದೆ. ಮೆಟ್ಟಿಲುಗಳ ಕೆಳ ಭಾಗಕ್ಕೆ ಸಂಬಂಧಿಸಿದಂತೆ ಯಾವ ನಿರ್ಬಂಧವನ್ನೂ ವಿಧಿಸಿಲ್ಲ ಎಂದು ಅದು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ ಗುಹಾ ದೇವಾಲಯದಲ್ಲಿ ಮಂತ್ರಘೋಷ, ಭಜನೆ ಮಾಡಲು ನಿರ್ಬಂಧ ವಿಧಿಸಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ಜಿಟಿ) ಸ್ಪಷ್ಟಪಡಿಸಿದೆ.</p>.<p>ಗುಹಾ ದೇವಾಲಯದ ಇಡೀ ಪ್ರದೇಶವನ್ನು ‘ನಿಶ್ಯಬ್ದ ವಲಯ’ ಎಂದು ಘೋಷಿಸುವ ಉದ್ದೇಶ ಹೊಂದಿಲ್ಲ. ಅಲ್ಲದೇ ಅಂತಹ ಘೋಷಣೆಯನ್ನೂ ಮಾಡಿಲ್ಲ ಎಂದು ಎನ್ಜಿಟಿ ಸ್ಪಷ್ಟಪಡಿಸಿದೆ.</p>.<p>ಯಾವುದೇ ವ್ಯಕ್ತಿಗಳು ಅಥವಾ ಭಕ್ತರು, ಶಿವಲಿಂಗದ ಮುಂಭಾಗದಲ್ಲಿ ನಿಶ್ಯಬ್ದ ಕಾಪಾಡಬೇಕು ಎಂಬ ನಿರ್ಬಂಧವನ್ನು ಮಾತ್ರ ವಿಧಿಸಲಾಗಿದೆ. ಇದನ್ನು ಹೊರತುಪಡಿಸಿದರೆ ದೇವಾಲಯದ ಮೆಟ್ಟಿಲುಗಳೂ ಸೇರಿದಂತೆ ಯಾವುದೇ ಭಾಗಕ್ಕೆ ಸಂಬಂಧಿಸಿದಂತೆ ನಿರ್ಬಂಧ ವಿಧಿಸಿಲ್ಲ ಎಂದು ಅದು ಗುರುವಾರ ತಿಳಿಸಿದೆ.</p>.<p>ಪವಿತ್ರ ಗುಹಾ ದೇವಾಲಯದ ಬಳಿಯ 30 ಮೆಟ್ಟಿಲುಗಳ ಆಚೆಗೆ ಯಾರೂ ಏನನ್ನೂ ಕೊಂಡೊಯ್ಯಬಾರದು. ಅದು ಸದ್ಯ ಜಾರಿಯಲ್ಲಿರುವ ದೇವಾಲಯ ಮಂಡಳಿಯ ಈ ಹಿಂದಿನ ನಿಯಮವೇ ಆಗಿದೆ. ಮೆಟ್ಟಿಲುಗಳ ಕೆಳ ಭಾಗಕ್ಕೆ ಸಂಬಂಧಿಸಿದಂತೆ ಯಾವ ನಿರ್ಬಂಧವನ್ನೂ ವಿಧಿಸಿಲ್ಲ ಎಂದು ಅದು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>