ಬೆಂಗಳೂರು: ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ‘ಬಹಳಷ್ಟು ಪ್ರಶಸ್ತಿಪತ್ರ, ಪದಕಗಳು ಕಪಾಟಿನಲ್ಲಿ ಭದ್ರವಾಗಿವೆ. ಆದರೆ, ಪ್ರಧಾನಿ ನೀಡಿದ ಈ ಪ್ರಶಂಸೆ ಎಂದೆಂದಿಗೂ ಮನಸ್ಸಿನಲ್ಲಿ ಉಳಿಯಲಿದೆ’ ಎಂದು ಟ್ವೀಟಿಸಿದ್ದಾರೆ.