ಅಕ್ಟೋಬರ್ನಲ್ಲಿ ಇಲ್ಲಿ ತಬೂಬಿಯ, ಅಶೋಕ, ಹೂ ಅರಸಿ ಜಾತಿಯವು ಸೇರಿ ಒಟ್ಟು 24 ಮರಗಳ ರೆಂಬೆ ಕೊಂಬೆಗಳನ್ನು ಕಿಡಿಗೇಡಿಗಳು ಕತ್ತರಿಸಿದ್ದರು. ಕೆಲವು ಮರಗಳ ಬುಡವನ್ನೇ ಗರಗಸದಿಂದ ತುಂಡರಿಸಲಾಗಿತ್ತು. ಸ್ಥಳೀಯರು ಈ ಬಗ್ಗೆ ಸಸ್ಯ ವೈದ್ಯ ವಿಜಯ್ ನಿಶಾಂತ್ ಗಮನಕ್ಕೆ ತಂದಿದ್ದರು. ಅವರು ಈ ಮರಗಳಿಗೆ ಸೋಂಕು ತಗಲದಂತೆ ಶಿಲೀಂಧ್ರನಾಶಕ ಮುಲಾಮು ಹಚ್ಚಿ ಚಿಕಿತ್ಸೆ ನೀಡಿದ್ದರು.