ಬಯಲಿನ ‘ಚಪ್ಪರ’ ವೇದಿಕೆಯಲ್ಲಿ ಕರಾವಳಿಯ ಸಂಸ್ಕೃತಿಗಳ ಪ್ರದರ್ಶನ, ‘ಫೋಟೋ ಸಂತೆ’ಯಲ್ಲಿ ಖ್ಯಾತ ಛಾಯಾಗ್ರಾಹಕರಿಂದ ಸೆರೆಹಿಡಿಯಲ್ಪಟ್ಟ ಕರಾವಳಿ ಕಲೆಗಳು ಹಾಗೂ ಜನಜೀವನ ಕುರಿತ ಛಾಯಾಚಿತ್ರಗಳ ಪ್ರದರ್ಶನ, ಅಪರೂಪದ ಗ್ರಾಮೀಣ ಕ್ರೀಡೆಗಳಿಗಾಗಿ ‘ಆಟದ ಬಯಲು’, ಬಾಣಸಿಗರು ಸ್ಥಳದಲ್ಲೇ ತಯಾರಿಸಿದ ಕರಾವಳಿ ಖಾದ್ಯಗಳಿಗಾಗಿ ‘ನಮ್ಮೂರ ತಿಂಡಿ’, ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ನೇತೃತ್ವದಲ್ಲಿ ‘ಕಾರ್ಟೂನು ಹಬ್ಬ’ ನಡೆಯಲಿದೆ ಎಂದು ತಿಳಿಸಿದರು.