ರಾಜ್ಯವು ಬ್ಯಾಂಕುಗಳ ತವರುಮನೆ. ಆದರೆ, 2015ರಲ್ಲಿ ರಾಜ್ಯದಲ್ಲಿ ನಡೆದ ನೇಮಕಾತಿಯಲ್ಲಿ 7,000 ಹುದ್ದೆಗಳಿಗೆ ಕೇವಲ 380 ಮಂದಿ ಕನ್ನಡಿಗರು ಆಯ್ಕೆಯಾಗಿದ್ದಾರೆ. 2017ರಲ್ಲಿ 9,000 ಹುದ್ದೆಗಳಲ್ಲಿ 440 ಮಂದಿಮಾತ್ರ ಆಯ್ಕೆಯಾಗಿದ್ದಾರೆ. ನಮ್ಮಲ್ಲಿನ ಬ್ಯಾಂಕುಗಳಲ್ಲಿ ಕೆಲಸ ಮಾಡುವ ಅವಕಾಶ ನಮ್ಮವರಿಗೇ ಸಿಗುತ್ತಿಲ್ಲ ಎಂದು ಅವರು ವಿಷಾದಿಸಿದರು.