ರಾಜ್ಯಸಭೆಯಲ್ಲಿ ರಾಜ್ಯದ ವಿಷಮ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಮುಫ್ತಿ, ಜಮ್ಮು ಕಾಶ್ಮೀರದ ಜನತೆ ಹಿಂಸಾಚಾರದ ಹೊಡೆತವನ್ನು ಇನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು? ಫಾರೂಕ್ ಅಬ್ದುಲ್ಲಾ ಅಥವಾ ನಾನು ಉಭಯ ರಾಷ್ಟ್ರಗಳ (ಪಾಕಿಸ್ತಾನ–ಭಾರತ) ನಡುವಿನ ಮಾತುಕತೆಯ ವಿಚಾರವನ್ನು ಪ್ರಸ್ತಾಪಿಸಿದಾಗ ರಾಷ್ಟ್ರವಿರೋಧಿಗಳು ಎಂದು ಯಾಕೆ ಕರೆಯಬೇಕು? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.