ಕನ್ನಡಿತಿ ಡಾ. ಟಿ.ಎಸ್. ಸತ್ಯವತಿ ಅವರು ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರಗಳಷ್ಟೇ ಅಲ್ಲ, ವಿದೇಶಗಳಲ್ಲೂ ಉಪನ್ಯಾಸ, ಸೋದಾಹರಣ ಭಾಷಣಗಳನ್ನು ನೀಡಿದ್ದಾರೆ. ಪಲ್ಲವಿ ಗಾಯನದ ರಸಾನುಭವ, ಅವಧಾನ ಪಲ್ಲವಿ, ಮಾನಸೋಲ್ಲಾಸ - ಹೀಗೆ ಸಂಗೀತ, ಸಂಸ್ಕೃತ, ಸಾಹಿತ್ಯಗಳ ಮೇಲೆ ಹತ್ತಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಸತ್ಯವತಿ ಅವರ ಉಪನ್ಯಾಸ, ಪ್ರಾತ್ಯಕ್ಷಿಕೆಗಳು ನಡೆದಿವೆ.