ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಡಿ. ನಾಗೇಶ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು, ‘ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ದರಖಾಸ್ತು ಸಂಬಂಧಿತ ಅರ್ಜಿಗಳು ವಿಲೇವಾರಿಯಾಗಿವೆ. ಆದರೆ ಈ ತಾಲ್ಲೂಕಿನಲ್ಲಿ ಕೇವಲ ಸಭೆಗಳು ಮಾತ್ರ ನಡೆದಿವೆ. ಒಬ್ಬ ರೈತನಿಗೂ ಹೊಸದಾಗಿ ಸಾಗುವಳಿ ಪತ್ರ ನೀಡಿಲ್ಲ. ರೈತರು ಹತ್ತಾರು ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನ ಸಾಗುವಳಿ ಪತ್ರ ನೀಡಬೇಕು’ ಎಂದು ದರಖಾಸ್ತು ಸಮಿತಿ ಸದಸ್ಯ ಕೃಷ್ಣೇಗೌಡ, ಎಂ. ಪುಟ್ಟೇಗೌಡ, ಗಂಗಾಧರ್ ಇತರರು ಒತ್ತಾಯಿಸಿದರು.