‘ಶಿಕ್ಷಕರಾದ ಬಿ.ಆರ್.ಉಜ್ಜಮ್ಮನವರ, ಪೂರ್ಣಿಮಾ ಶೇಬಗೊಂಡ, ಜ್ಯೋತಿ ದಡೂತಿ, ಬಸವರಾಜ ನೀಲಗಾರ, ಎಸ್ಡಿಎಂಸಿ ಅಧ್ಯಕ್ಷ ಪರಶುರಾಮ ಜೋಗೇರ ಹಾಗೂ ಸರ್ವ ಸದಸ್ಯರು, ಗ್ರಾಮಸ್ಥರು ಹಾಗೂ ಮಕ್ಕಳ ನಿರಂತರ ಪರಿಶ್ರಮ, ಬಿಇಒ ಶಂಕರ ಹಳ್ಳಿಗುಡಿ ಹಾಗೂ ಸಮನ್ವಯಾಧಿಕಾರಿ ಶಂಕರ ಹಡಗಲಿ ಅವರ ಮಾರ್ಗದರ್ಶನಗಳಿಂದ ಶಾಲೆಯು ಜಿಲ್ಲೆಯ ಏಕೈಕ ಪರಿಸರ ಮಿತ್ರ ಶಾಲೆ ಎಂಬ ಹೆಗ್ಗಳಿಕೆಯನ್ನು ಪಡೆಯುವಂತಾಯಿತು’ ಎನ್ನುತ್ತಾರೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಬಿ.ಆರ್. ಉಜ್ಜಮ್ಮನವರ.