‘ಮನೆ ಮಂದಿಗೂ ಸ್ನೇಹಿತರಿಗೂ ನಾನು ಏನು, ನನ್ನ ಸಾಮರ್ಥ್ಯ ಏನು ಎಂಬುದು ಗೊತ್ತು. ಆದ್ದರಿಂದ ಅವರು ಬೇಸರಪಟ್ಟುಕೊಳ್ಳಲಿಲ್ಲ. ಆದರೆ ಸಾಮಾಜಿಕ ತಾಣಗಳಲ್ಲಿ ಟೀಕೆಗಳು ಕೇಳಿ ಬಂದಿವೆ. ದೇಶಕ್ಕಾಗಿ ಆಡುವಾಗ ನಿರೀಕ್ಷೆ ಹುಸಿಯಾದರೆ ಇದೆಲ್ಲ ಸಹಜ. ನನ್ನಿಂದಾಗಿ ತಂಡ ಗೆದ್ದಿದ್ದರೆ ಅವರು ಅಭಿನಂದನೆಗಳ ಮಳೆ ಸುರಿಸುತ್ತಿದ್ದರು’ ಎಂದು ವಿಜಯ್ ಶಂಕರ್ ಹೇಳಿದರು.