ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಚಾಲಕ ನಾಗರಾಜು ಹೆತ್ತೂರು ಮಾತನಾಡಿ, ‘ಕ್ಷೇತ್ರದ ಜನರಿಗೆ ಬಾಡೂಟದ ಜತೆಗೆ ಮದ್ಯ ಪೂರೈಸಲಾಗುತ್ತಿದೆ. ಮೂರು ದಿನಗಳಿಂದ ಮತದಾರರಿಗೆ ವಿತರಿಸುತ್ತಿರುವ ಹಣ, ಸೀರೆ, ಪ್ಯಾಂಟ್ ಪೀಸ್ಗಳನ್ನು ಮಾಧ್ಯಮಗಳ ಎದುರು ಪ್ರದರ್ಶಿಸಿದರು.‘ಸೋಮಶೇಖರ್ ಭಾವಚಿತ್ರವಿರುವ ಬ್ಯಾಗ್ಗಳನ್ನು ಎಲ್ಲೆಡೆ ಹಂಚಲಾಗುತ್ತಿದೆ. ಇದು ಕ್ಷೇತ್ರದ ಮತದಾರರ ಮೇಲೆ ಹಾಗೂ ಚುನಾವಣೆ ಮೇಲೆ ಗಂಭೀರ ಪ್ರಭಾವ ಬೀರಲಿದೆ. ಕೂಡಲೇ ಅಧಿಕಾರಿಗಳು ಕಟ್ಟಾಯ ಹೋಬಳಿಯ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಒತ್ತಾಯಿಸಿದರು.