ರಂಭಾಪುರಿ ಪೀಠದಲ್ಲಿ ಸೋಮವಾರ ಪೇಜಾವರಶ್ರೀ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ವೀರಶೈವ ಧರ್ಮವಾಚಕ, ಲಿಂಗಾಯತ ಕ್ರಿಯಾವಾಚಕ. ವೀರಶೈವ ಲಿಂಗಾಯತರಿಗೆ ಇಷ್ಟಲಿಂಗ ಪೂಜಾ ಪ್ರಧಾನ ಮತ್ತು ಮುಖ್ಯವಾಗಿರುತ್ತದೆ. ಇಷ್ಟಲಿಂಗದಲ್ಲಿ ಸಮರಸ-ಮೂರ್ತಿ ಪೂಜೆಯಲ್ಲಿ ಔಪಚಾರಿಕ ಭಾವನೆಯಿಂದ ಪೂಜಿಸುವ ಸಂಪ್ರದಾಯ ಬೆಳೆದು ಬಂದಿದೆ. ಹೀಗಿರುವಾಗ ಲಿಂಗಾಯತರಷ್ಟೇ ಇಷ್ಟಲಿಂಗ ಪೂಜಾ ಆರಾಧಕರು, ವೀರಶೈವರು ಮೂರ್ತಿ ಆರಾಧಕರು ಎಂಬುದು ಒಪ್ಪಿಕೊಳ್ಳುವ ಮಾತಲ್ಲ’ ಎಂದಿದ್ದಾರೆ.