ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಲ್ ಇಂಡಿಯಾ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಜೆಡಿಎಸ್ಗೆ ಬೆಂಬಲ ನೀಡಲಿದೆ ಎಂದು ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಸೋಮವಾರ ಹೇಳಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸುವುದಿಲ್ಲ. ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಪಕ್ಷದ ಜೆಡಿಎಸ್ಅನ್ನು ಬೆಂಬಲಿಸುತ್ತದೆ ಮತ್ತು ಅವರ ಪರ ಪ್ರಚಾರ ಮಾಡುತ್ತದೆ. ಎಲ್ಲಾ ರಾಷ್ಟ್ರೀಯ ಪಕ್ಷಗಳು ವಿಫಲವಾಗಿವೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಗೆ ಪ್ರಯೋಜನವಾಗುವಂತೆ ಮತಗಳನ್ನು ವಿಭಜಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂಬ ಆರೋಪ ಆಧಾರರಹಿತ. ಗುಜರಾತ್, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ಸ್ಪರ್ಧಿಸಿಲ್ಲ. ಮಹಾರಾಷ್ಟ್ರದಿಂದ ಲೋಕಸಭೆಗೂ ಸ್ಪರ್ಧಿಸಿಲ್ಲ, ಅಲ್ಲಿ ಕಾಂಗ್ರೆಸ್ಗೆ ಏನಾಯಿತು? ಎಂದು ಓವೈಸಿ ಹೇಳಿದ್ದಾರೆ.
We will not contest in upcoming Karnataka elections, AIMIM will support JDS and will campaign for them. We feel both national parties have totally failed: Asaduddin Owaisi #KarnatakaElection2018pic.twitter.com/wxQDgLjpl2