ಸುಡಾನ್ನ ಹಾರಾಡೋ ಹದ್ದುಗಳ ಕಣ್ಣಂಚಲ್ಲಿ ತೆವಳುವ ಒಣ ಮಾಂಸದ ನರಗಳಲ್ಲಿ
ಗಡಿಗಳಲಿ ಗ್ರೀಸು, ಆಯಿಲ್ಲುಗಳ ಹಾಕಿ ತಿಕ್ಕಿ ತೊಳೆದ,
ಗುಬ್ಬಿ ಗೂಡು ಕಟ್ಟದ ಬಂದೂಕಿನ
ನಳಿಕೆಯ ಒಳಗೆ ಸಾಯುವವನ ಹೆಸರು ಹೊತ್ತ ಗುಂಡಿನತ್ತ...
ಕವಿತೆ ಒಂದೇ ಕಾಲಲಿ ನಿಂತಿದೆ!
ಬೆತ್ತಲೆದೆಗಳಲಿ
ಕೈಯಿಕ್ಕೋ ಹುನ್ನಾರದ,
ಸಿಕ್ಕ ಕ್ಷಣವೇ ಸ್ಖಲಿಸಿಬಿಡೋ
ಕ್ಲುಪ್ತ ಮನಸುಗಳ ಮರುಭೂಮಿಯಲ್ಲಿ...
ಕತ್ತಲ ಖೋಲಿಗೆ ದೂರ್ವಾಸ, ದ್ರೋಣರ ದೂಡಿ
ಧರ್ಮದ ಸಾಬೂನು ಉಜ್ಜುವ
ನೂರಾರು ಮೈ ಮನಸುಗಳಲ್ಲಿ
ಸತ್ತ ಕವಿತೆ ಸಿಕ್ಕೀತೋ...ಏನೋ!