ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಲಾಷ್‌ ಟಾಮಿ ಆದಷ್ಟು ಬೇಗ ತವರಿಗೆ: ಭಾರತೀಯ ನೌಕಾಸೇನೆ

Last Updated 1 ಅಕ್ಟೋಬರ್ 2018, 18:13 IST
ಅಕ್ಷರ ಗಾತ್ರ

ಮೆಲ್ಬರ್ನ್‌:ಭಾರತದ ನೌಕಾ ಪಡೆ ಕಮಾಂಡರ್ ಅಭಿಲಾಷ್ ಟಾಮಿ ಆದಷ್ಟು ಬೇಗ ಭಾರತಕ್ಕೆ ಹಿಂತಿರುಗಲು ಸಿದ್ಧತೆ ನಡೆಸಿದ್ದಾರೆ ಎಂದು ಭಾರತೀಯ ನೌಕಾಸೇನೆ ತಿಳಿಸಿದೆ.

ಒಬ್ಬಂಟಿಯಾಗಿ ವಿಶ್ವಪರ್ಯಟನೆ ನಡೆಸುವ‘ಗೋಲ್ಡನ್ ಗ್ಲೋಬ್ ರೇಸ್’ ಸ್ಪರ್ಧೆಯಲ್ಲಿ ಟಾಮಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಮೂರು ದಿನಗಳ ಹಿಂದೆ ಅವರ ಹಾಯಿದೋಣಿ ಹಾನಿಗೊಳಗಾಗಿ ಅವರು ಸಮುದ್ರದ ಮಧ್ಯಭಾಗದಲ್ಲಿ ಸಿಲುಕಿದ್ದರು.ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದರಿಂದ ಹಾಯಿದೋಣಿಯಲ್ಲಿ ಅವರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು.

ಆಸ್ಟ್ರೇಲಿಯಾದ ರಕ್ಷಣಾ ಸಹಕಾರ ಕೇಂದ್ರ, ರಕ್ಷಣಾ ಇಲಾಖೆ ಹಾಗೂಭಾರತೀಯ ನೌಕಾಪಡೆ ಜತೆಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಇದಕ್ಕಾಗಿ ಭಾರತದ ಪಿ–8ಐ ಸರ್ವೇಕ್ಷಣಾ ವಿಮಾನವನ್ನು ನಿಯೋಜಿಸಿತ್ತು.ಟಾಮಿ ಅವರನ್ನುಹಿಂದೂಮಹಾಸಾಗರದ ದಕ್ಷಿಣ ಭಾಗದಲ್ಲಿ ರಕ್ಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT