‘ಯಡಿಯೂರಪ್ಪ ಅವರು ಇಳಕಲ್ಗೆ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಮಾಡಿದ್ದಕ್ಕೆ ಸಂಬಂಧಿಸಿದಂತೆ ₹ 13 ಲಕ್ಷ ಬಿಲ್ನ ಕಡತ ನನ್ನ ಬಳಿ ಬಂದಿತ್ತು. ಇಂತಹ ದುಂದುವೆಚ್ಚ ಅಗತ್ಯವೇ’ ಎಂಬ ಕುಮಾರಸ್ವಾಮಿ ಸೋಮವಾರ ಪ್ರಶ್ನಿಸಿದ್ದರು. ಇದಕ್ಕೆ ಗುರುವಾರ ಪತ್ರ ಬರೆದು ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ‘ನಾನು ಈಗಲೂ ಪ್ರವಾಸದ ವೆಚ್ಚ ಭರಿಸಲು ಸಿದ್ಧನಿದ್ದೇನೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು, ಜನರನ್ನು ದಾರಿ ತಪ್ಪಿಸುವ ಅಸಂಬದ್ಧ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇಂತಹ ಕೀಳು ಮಟ್ಟದ ಹೇಳಿಕೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ’ ಎಂದಿದ್ದಾರೆ.