‘ಇದು ತಿರುಚಲಾದ ಮಾಹಿತಿ’ ಎಂದು ‘ದಿ ಲಾಜಿಕಲ್ ಇಂಡಿಯನ್’ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ‘ದೆಹಲಿಯ ಆಜಾದ್ಪುರದಲ್ಲಿ 2022ರ ಮಾರ್ಚ್ 3ರಂದು ಈ ಕೊಲೆ ನಡೆದಿದೆ. ವೈರಲ್ ಆಗಿರುವ ಪೋಸ್ಟ್ಗಳಲ್ಲಿ ಇರುವಂತೆ, ಹಿಂದೂವನ್ನು ರೋಹಿಂಗ್ಯಾ ಮುಸ್ಲಿಮರು ಕೊಂದ ಪ್ರಕರಣವಲ್ಲ ಇದು. ಬದಲಿಗೆ ಆಜಾದ್ಪುರದ ನಿವಾಸಿಯಾದ ನರೇಂದರ್ ಅವರನ್ನು, ಅವರ ಸ್ನೇಹಿತರಾದ ರಾಹುಲ್ ಕಾಳಿ, ರೋಹಿತ್ ಕಾಳಿ ಅವರು ಹೊಡೆದು ಕೊಂದಿದ್ದರು. ಹಣಕಾಸಿನ ವಿಚಾರಕ್ಕೆ ಈ ಕೊಲೆ ನಡೆದಿತ್ತು. ಪೊಲೀಸರುಇಬ್ಬರನ್ನೂ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ತನಿಖೆ ಪ್ರಗತಿಯಲ್ಲಿ ಇದೆ. ಆದರೆ, ಸುಳ್ಳು ಮಾಹಿತಿಯೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ’ ಎಂದು ಫ್ಯಾಕ್ಟ್ಚೆಕ್ನಲ್ಲಿ ವಿವರಿಸಲಾಗಿದೆ.