‘ಟೈಟ್ಲರ್ ಅವರು ಪುಲ್ ಬಂಗಶ್ ಗುರುದ್ವಾರದ ಆಜಾದ್ ಮಾರುಕಟ್ಟೆ ಬಳಿ ಸೇರಿದ್ದ ಜನರನ್ನು ಪ್ರಚೋದಿಸಿದ್ದರು. ಗಲಭೆ ನಡೆಸುವಂತೆ ಅವರಿಗೆ ಕುಮ್ಮಕ್ಕು ನೀಡಿದ್ದರು. ಹೀಗಾಗಿಯೇ ದುಷ್ಕರ್ಮಿಗಳು ಗುರುದ್ವಾರಕ್ಕೆ ಬೆಂಕಿ ಹಚ್ಚಿದ್ದರು. ಸಿಖ್ ಸಮುದಾಯಕ್ಕೆ ಸೇರಿದ್ದ ಠಾಕೂರ್ ಸಿಂಗ್, ಬಾದಲ್ ಸಿಂಗ್ ಹಾಗೂ ಗುರುಚರಣ್ ಸಿಂಗ್ ಎಂಬುವರನ್ನು ಹತ್ಯೆ ಮಾಡಲಾಗಿತ್ತು’ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.