‘ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕೆಲಸವಲ್ಲ. ಅದನ್ನು ಆಯಾ ರಾಜ್ಯಗಳು ನಿಭಾಯಿಸುತ್ತವೆ. ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಖಡಕ್ಕ್ಕಾಗಿ ತಿಳಿಸಿತು.
[related]
‘ಈ ಸಿನಿಮಾದ ಕುರಿತು ಗುರುವಾರವೇ ನಾವು ಸಕಾರಣವಾದ ಆದೇಶ ಹೊರಡಿಸಿದ್ದೇವೆ. ಸಿಬಿಎಫ್ಸಿ ಚಿತ್ರ ಬಿಡುಗಡೆಗೆ ಒಮ್ಮೆ ಪ್ರಮಾಣಪತ್ರ ನೀಡಿದ ಬಳಿಕ, ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯತೆ ಇಲ್ಲ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.