ಕೇರಳದ ಹಿಂದೂ ಯುವತಿ ಅಖಿಲಾರನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆಯೇ ಮತ್ತು ಇಂತಹ ಇತರ ಪ್ರಕರಣಗಳು ಅಲ್ಲಿ ನಡೆದಿವೆಯೇ ಎಂಬುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸಬೇಕು. ಅಖಿಲಾ ಮತ್ತು ಶಫೀನ್ ಜಹಾನ್ ಮದುವೆ ಮತ್ತು ಅಖಿಲಾ ಮತಾಂತರದ ಹಿಂದೆ ಬಲವಂತ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾದ ಬಳಿಕ ಅಖಿಲಾ ಹೆಸರನ್ನು ಹಾದಿಯಾ ಎಂದು ಬದಲಿಸಲಾಗಿದೆ.