ಹೈದರಾಬಾದ್: ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿ ಕೇಂದ್ರ ಸರ್ಕಾರ ಅನಗತ್ಯವಾಗಿ ಮೂಗು ತೂರಿಸುತ್ತಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಆರೋಪಿಸಿದೆ.
‘ಮುಸ್ಲಿಂ ವೈಯಕ್ತಿಕ ಕಾನೂನಿಗೆ ತ್ರಿವಳಿ ತಲಾಖ್ ನಿಷೇಧ ಮಸೂದೆ ಅಪಾಯಕಾರಿಯಾಗಿದ್ದು, ಅದು ಜಾರಿಯಾಗದಂತೆ ತಡೆಯಬೇಕಿದೆ’ ಎಂದು ಮಂಡಳಿ ಪ್ರಧಾನ ಕಾರ್ಯದರ್ಶಿ ಮೌಲಾನ ವಲಿ ರೆಹಮಾನಿ ಅಭಿಪ್ರಾಯಪಟ್ಟಿದ್ದಾರೆ.
ಎಐಎಂಪಿಎಲ್ಬಿ 26ನೇ ಸಮಾವೇಶದಲ್ಲಿ ಶನಿವಾರ ವರದಿ ಮಂಡಿಸಿದ ಅವರು, ತ್ರಿವಳಿ ತಲಾಖ್ ಮಸೂದೆ ಕುರಿತು ರಾಜ್ಯಸಭೆ
ಯಲ್ಲಿ ವಿರೋಧ ಪಕ್ಷಗಳು ತಳೆದಿರುವ ನಿಲುವನ್ನು ಪ್ರಶಂಸಿದ್ದಾರೆ.