<p><strong>ಚಂಡೀಗಡ</strong>: ರಾಹುಲ್ ಗಾಂಧಿ ಅವರ ‘ಮತಗಳ್ಳತನ’ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಬಾವ, ಉದ್ಯಮಿ ರಾಬರ್ಟ್ ವಾದ್ರಾ, ಜನರು ರಾಹುಲ್ ಅವರ ಕಠಿಣ ಪರಿಶ್ರಮವನ್ನು ಅರ್ಥ ಮಾಡಿಕೊಳ್ಳಬೇಕು, ಇಲ್ಲವೆಂದರೆ ಬಿಜೆಪಿ ‘ತಪ್ಪಾದ ದಾರಿ’ಯಲ್ಲಿ ಚುನಾವಣೆಯನ್ನು ಗೆಲ್ಲುತ್ತಲೆ ಇರುತ್ತದೆ ಎಂದು ಗುರುವಾರ ಹೇಳಿದರು.</p>.<p>ಹರಿಯಾಣದ ಪಂಚಕುಲದಲ್ಲಿರುವ ನಾಡಾ ಸಾಹಿಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ವಾದ್ರಾ, ‘ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲೂ ತಪ್ಪು ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದು ನಿಲ್ಲಬೇಕು. ರಾಹುಲ್ ಗಾಂಧಿ ಆಧಾರವನ್ನು ನೀಡಿದ್ದು, ಎಲ್ಲವೂ ಅದರಲ್ಲಿದೆ’ ಎಂದರು.</p>.<p>‘ನಾವು ಈಗಲೇ ಜಾಗೃತರಾಗಿದ್ದರೆ, ಈ ಸರ್ಕಾರ ಚುನಾವಣೆಗಳನ್ನು ತಪ್ಪಾದ ದಾರಿಯಲ್ಲಿ ಗೆಲ್ಲುವುದನ್ನು ಮುಂದುವರೆಸುತ್ತದೆ. ಅ ಮೂಲಕ ಜನರನ್ನು ಇನ್ನಷ್ಟು ತೊಂದರೆಗೆ ಸಿಲುಕಿಸುತ್ತದೆ’ ಎಂದು ವಾದ್ರಾ ಹೇಳಿದರು. </p>.<p class="title">‘ದೇಶದಲ್ಲಿ ಶಾಂತಿ ಮತ್ತು ಪರಸ್ಪರ ಸಹೋದರತ್ವ ಇರಬೇಕು. ನನ್ನ ಧಾರ್ಮಿಕ ಪ್ರವಾಸ ದೇಶಾದ್ಯಂತ ನಡೆಯುತ್ತದೆ, ನಾನು ಇಲ್ಲಿಗೆ ಬಂದು ತಲೆ ಬಾಗಿದ್ದೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಡ</strong>: ರಾಹುಲ್ ಗಾಂಧಿ ಅವರ ‘ಮತಗಳ್ಳತನ’ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಬಾವ, ಉದ್ಯಮಿ ರಾಬರ್ಟ್ ವಾದ್ರಾ, ಜನರು ರಾಹುಲ್ ಅವರ ಕಠಿಣ ಪರಿಶ್ರಮವನ್ನು ಅರ್ಥ ಮಾಡಿಕೊಳ್ಳಬೇಕು, ಇಲ್ಲವೆಂದರೆ ಬಿಜೆಪಿ ‘ತಪ್ಪಾದ ದಾರಿ’ಯಲ್ಲಿ ಚುನಾವಣೆಯನ್ನು ಗೆಲ್ಲುತ್ತಲೆ ಇರುತ್ತದೆ ಎಂದು ಗುರುವಾರ ಹೇಳಿದರು.</p>.<p>ಹರಿಯಾಣದ ಪಂಚಕುಲದಲ್ಲಿರುವ ನಾಡಾ ಸಾಹಿಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ವಾದ್ರಾ, ‘ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲೂ ತಪ್ಪು ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದು ನಿಲ್ಲಬೇಕು. ರಾಹುಲ್ ಗಾಂಧಿ ಆಧಾರವನ್ನು ನೀಡಿದ್ದು, ಎಲ್ಲವೂ ಅದರಲ್ಲಿದೆ’ ಎಂದರು.</p>.<p>‘ನಾವು ಈಗಲೇ ಜಾಗೃತರಾಗಿದ್ದರೆ, ಈ ಸರ್ಕಾರ ಚುನಾವಣೆಗಳನ್ನು ತಪ್ಪಾದ ದಾರಿಯಲ್ಲಿ ಗೆಲ್ಲುವುದನ್ನು ಮುಂದುವರೆಸುತ್ತದೆ. ಅ ಮೂಲಕ ಜನರನ್ನು ಇನ್ನಷ್ಟು ತೊಂದರೆಗೆ ಸಿಲುಕಿಸುತ್ತದೆ’ ಎಂದು ವಾದ್ರಾ ಹೇಳಿದರು. </p>.<p class="title">‘ದೇಶದಲ್ಲಿ ಶಾಂತಿ ಮತ್ತು ಪರಸ್ಪರ ಸಹೋದರತ್ವ ಇರಬೇಕು. ನನ್ನ ಧಾರ್ಮಿಕ ಪ್ರವಾಸ ದೇಶಾದ್ಯಂತ ನಡೆಯುತ್ತದೆ, ನಾನು ಇಲ್ಲಿಗೆ ಬಂದು ತಲೆ ಬಾಗಿದ್ದೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>