ಭಾರತ, ಹಿಂದುತ್ವ ಅಥವಾ ಸಂಘಕ್ಕೆ ಅವಹೇಳನ ಮಾಡಲು ವಿರೋಧಿ ಶಕ್ತಿಗಳು ಹೊಸ ಯೋಜನೆಗಳ ಹುಡುಕಾಟದಲ್ಲಿ ಸಕ್ರಿಯರಾಗಿದ್ದಾರೆ ಎಂದು ಆರೋಪಿಸಿರುವ ಸಂಘ, ‘ದೇಶದ ಎಲ್ಲ ಅನಾಹುತಳಿಗೆ ಸನಾತನ ಧರ್ಮ ಕಾರಣ ಎಂದು ಹೇಳುವುದು, ದಕ್ಷಿಣ ಭಾರತವನ್ನು ಪ್ರತ್ಯೇಕಿಸುವ ಮಾತುಗಳನ್ನಾಡುವುದು, ಜಾತಿ ಗಣತಿಯಂತ ಸೂಕ್ಷ್ಮ ವಿಷಯದಲ್ಲಿ ರಾಜಕೀಯ ಆಟವಾಡುವುದು–ಇವೆಲ್ಲವೂ ದೇಶದ ಏಕತೆಗೆ ಧಕ್ಕೆ ತರುವ ಪ್ರಯತ್ನಗಳಾಗಿವೆ’ ಎಂದು ಹೇಳಿದೆ.