ನವದೆಹಲಿ :‘ಅಯೋಧ್ಯೆ ವಿವಾದಿತ ಸ್ಥಳದಲ್ಲಿ ದೊರೆತಿರುವ ಸ್ತಂಭಗಳಲ್ಲಿ ವಿವಿಧ ದೇವತೆಗಳ ಚಿತ್ರಗಳಿವೆ’ ಎಂದು ರಾಮಲಲ್ಲಾ ವಿರಾಜಮಾನ್ ಪರ ವಕೀಲರು ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದರು.
ವಿವಾದಿತ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಪ್ರಕರಣದ ವಿಚಾರಣೆಯ ಏಳನೇ ದಿನಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್ ಅವರು, ಈ ಕುರಿತ ಮಾಹಿತಿ ನೀಡಿದರು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದ ಎದುರು ವಾದ ಮಂಡಿಸಿ, ದೇವತೆಗಳ ಚಿತ್ರಗಳಿದ್ದ ಆಲ್ಬಮ್ ಅನ್ನೂ ಹಸ್ತಾಂತರಿಸಿದರು. ಮಸೀದಿಗಳಲ್ಲಿ ಇಂಥದು ಕಂಡುಬರುವುದಿಲ್ಲ ಎಂದು ಪ್ರತಿಪಾದಿಸಿದರು.