ಆ ತೀರ್ಪನ್ನು ಬರೆದವರು ಯಾರು ಎಂಬುದನ್ನು ಉಲ್ಲೇಖಿಸಿರಲಿಲ್ಲ. ‘ಈ ಪ್ರಕರಣದಲ್ಲಿ ಸಂಘರ್ಷದ ದೀರ್ಘ ಇತಿಹಾಸ, ದೇಶದ ಇತಿಹಾಸವನ್ನು ಆಧರಿಸಿದ ವಿಭಿನ್ನ ದೃಷ್ಟಿಕೋನಗಳು ಇವೆ. ನ್ಯಾಯಾಲಯವು ಏಕಕಂಠದಲ್ಲಿ ತೀರ್ಪು ನೀಡಬೇಕು. ತೀರ್ಪು ನೀಡುವಲ್ಲಿ ನ್ಯಾಯಮೂರ್ತಿಗಳು ಒಟ್ಟಾಗಿದ್ದಾರೆ ಎಂಬ ಸಂದೇಶ ರವಾನಿಸುವುದು ಮಾತ್ರವೇ ಅಲ್ಲದೆ, ತೀರ್ಪಿನಲ್ಲಿ ನೀಡಿರುವ ಕಾರಣಗಳ ವಿಚಾರದಲ್ಲಿಯೂ ಏಕಾಭಿಪ್ರಾಯ ಇತ್ತು ಎಂಬ ಸಂದೇಶವನ್ನು ರವಾನಿಸುವ ಉದ್ದೇಶವಿತ್ತು’ ಎಂದು ಅವರು ಹೇಳಿದ್ದಾರೆ.