<p><strong>ನವದೆಹಲಿ:</strong> ‘ದೇಶದ ಬೀದಿಗಳಿಂದ ಭಿಕ್ಷುಕರ ನಿರ್ಮೂಲನೆಗೆ ಸರ್ಕಾರದ ಯೋಜನೆಯ ಜೊತೆಗೆ ಜನರ ಬೆಂಬಲ ಹಾಗೂ ಸಮುದಾಯದ ಭಾಗವಹಿಸುವಿಕೆಯ ಅಗತ್ಯವಿದೆ’ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಹೇಳಿದರು.</p>.<p>ಭಿಕ್ಷುಕರ ನಿಗಮದ ಸಂಸ್ಥಾಪಕ ಡಾ. ಚಂದ್ರ ಮಿಶ್ರಾ ಅವರ ‘ಕೊನೆಯ ಭಿಕ್ಷುಕ’ ಪುಸ್ತಕದ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಸಚಿವರು, ವಾರಾಣಸಿ ಮತ್ತು ಇಂದೋರ್ನಲ್ಲಿನ ಭಿಕ್ಷುಕರ ಪುನರ್ವಸತಿಯನ್ನು ಉದಾಹರಿಸಿದರು.</p>.<p>‘ವಾರಾಣಸಿಯಲ್ಲಿ ಭಿಕ್ಷುಕರಿಗೆ ವ್ಯಾಪಾರ ತರಬೇತಿ ನೀಡಿದ ನಂತರ ಅವರು ಭಿಕ್ಷೆ ಬೇಡುವುದನ್ನು ತೊರೆದು, ಉದ್ಯೋಗ ಆಧಾರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಇದೀಗ ನೋಂದಾಯಿತ ಜಿಎಸ್ಟಿ ಪಾವತಿದಾರರಾಗಿ ತಿಂಗಳಿಗೆ ₹35,000–₹40,000 ಸಂಪಾದಿಸುತ್ತಿದ್ದಾರೆ’ ಎಂದು ಅವರು ಹೇಳಿದರು.</p>.<p>‘ಅವರೀಗ ಸಮಾಜದ ಮೇಲೆ ಅವಲಂಬಿತರಾಗಿಲ್ಲ. ತಾವೇ ಉದ್ಯೋಗ ನೀಡುವಂತಾಗಿದ್ದಾರೆ’ ಎಂದರು.</p>.<p>‘ಇಂದೋರ್ನಲ್ಲಿ ಸ್ಥಳೀಯ ನಿವಾಸಿಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಪುನರ್ವಸತಿ ಪಡೆದ ಭಿಕ್ಷುಕರಿಗೆ ಶಿಕ್ಷಣ, ಆರೋಗ್ಯ ಹಾಗೂ ಕೌಶಲ ತರಬೇತಿ ನೀಡಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ವೀರೇಂದ್ರ ಹೇಳಿದರು.</p>.<p>ಸಚಿವಾಲಯದ ‘ಸ್ಮೈಲ್’ ಯೋಜನೆಯಡಿ ಭಿಕ್ಷುಕರು, ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಿ ಆಶ್ರಯ, ಕೌಶಲ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.</p>.<p>ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ವಿ. ರಾಮಸುಬ್ರಮಣಿಯನ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ದೇಶದ ಬೀದಿಗಳಿಂದ ಭಿಕ್ಷುಕರ ನಿರ್ಮೂಲನೆಗೆ ಸರ್ಕಾರದ ಯೋಜನೆಯ ಜೊತೆಗೆ ಜನರ ಬೆಂಬಲ ಹಾಗೂ ಸಮುದಾಯದ ಭಾಗವಹಿಸುವಿಕೆಯ ಅಗತ್ಯವಿದೆ’ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಹೇಳಿದರು.</p>.<p>ಭಿಕ್ಷುಕರ ನಿಗಮದ ಸಂಸ್ಥಾಪಕ ಡಾ. ಚಂದ್ರ ಮಿಶ್ರಾ ಅವರ ‘ಕೊನೆಯ ಭಿಕ್ಷುಕ’ ಪುಸ್ತಕದ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಸಚಿವರು, ವಾರಾಣಸಿ ಮತ್ತು ಇಂದೋರ್ನಲ್ಲಿನ ಭಿಕ್ಷುಕರ ಪುನರ್ವಸತಿಯನ್ನು ಉದಾಹರಿಸಿದರು.</p>.<p>‘ವಾರಾಣಸಿಯಲ್ಲಿ ಭಿಕ್ಷುಕರಿಗೆ ವ್ಯಾಪಾರ ತರಬೇತಿ ನೀಡಿದ ನಂತರ ಅವರು ಭಿಕ್ಷೆ ಬೇಡುವುದನ್ನು ತೊರೆದು, ಉದ್ಯೋಗ ಆಧಾರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಇದೀಗ ನೋಂದಾಯಿತ ಜಿಎಸ್ಟಿ ಪಾವತಿದಾರರಾಗಿ ತಿಂಗಳಿಗೆ ₹35,000–₹40,000 ಸಂಪಾದಿಸುತ್ತಿದ್ದಾರೆ’ ಎಂದು ಅವರು ಹೇಳಿದರು.</p>.<p>‘ಅವರೀಗ ಸಮಾಜದ ಮೇಲೆ ಅವಲಂಬಿತರಾಗಿಲ್ಲ. ತಾವೇ ಉದ್ಯೋಗ ನೀಡುವಂತಾಗಿದ್ದಾರೆ’ ಎಂದರು.</p>.<p>‘ಇಂದೋರ್ನಲ್ಲಿ ಸ್ಥಳೀಯ ನಿವಾಸಿಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಪುನರ್ವಸತಿ ಪಡೆದ ಭಿಕ್ಷುಕರಿಗೆ ಶಿಕ್ಷಣ, ಆರೋಗ್ಯ ಹಾಗೂ ಕೌಶಲ ತರಬೇತಿ ನೀಡಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ವೀರೇಂದ್ರ ಹೇಳಿದರು.</p>.<p>ಸಚಿವಾಲಯದ ‘ಸ್ಮೈಲ್’ ಯೋಜನೆಯಡಿ ಭಿಕ್ಷುಕರು, ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಿ ಆಶ್ರಯ, ಕೌಶಲ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.</p>.<p>ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ವಿ. ರಾಮಸುಬ್ರಮಣಿಯನ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>