‘ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಆಡುತ್ತಿರುವ ರಾಜಕೀಯದ ‘ಅಸಹ್ಯದ ಆಟ’ವಿದು. ಬಡತನ, ಹಣದುಬ್ಬರ, ನಿರುದ್ಯೋಗ ಮತ್ತು ಅಭಿವೃದ್ಧಿಯ ಪ್ರಮುಖ ಸಮಸ್ಯೆಗಳು ಬದಿಗೆ ಸರಿಯುತ್ತಿವೆ. ಆದ್ದರಿಂದ, ನಮ್ಮ ಪಕ್ಷವು ಈ ಜಾತಿವಾದಿ, ಕೋಮುವಾದಿ ಮತ್ತು ಬಂಡವಾಳಶಾಹಿ ಮೈತ್ರಿಗಳಿಂದ ಅಂತರ ಕಾಯ್ದುಕೊಳ್ಳುವುದು ಸಂಪೂರ್ಣವಾಗಿ ಸರಿಯಾಗಿಯೇ ಇದೆ ಮತ್ತು ಸಾರ್ವಜನಿಕ ಹಿತಾಸಕ್ತಿಯೂ ಇದರಲ್ಲಿದೆ’ ಎಂದು ಮಾಯಾವತಿ ಹೇಳಿದರು.