ನವದೆಹಲಿ:ಜೈವಿಕ ಭಯೋತ್ಪಾದನೆ ತಡೆಗೆ ಪರಿಣಾಮಕಾರಿ ಕಾನೂನು ರೂಪಿಸುವ ಅಗತ್ಯವಿದೆ ಎಂದು ಸಂಸತ್ತಿನ ಆರೋಗ್ಯ ಸ್ಥಾಯಿಸಮಿತಿಯು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಜೈವಿಕ ಅಸ್ತ್ರಗಳನ್ನು ನಿಯಂತ್ರಿಸಬೇಕಾದ ಮಹತ್ವವನ್ನು ಕೋವಿಡ್–19 ಸಾಂಕ್ರಾಮಿಕ ತಿಳಿಸಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿರುವ ಸಮಿತಿ, ವಿವಿಧ ದೇಶಗಳ ನಡುವೆ ಈ ಸಂಬಂಧ ಮಹತ್ವದ ಪಾಲುದಾರಿಕೆ ಆಗಬೇಕಿದೆ ಎಂದಿದೆ.