ಗುರುವಾರದ ಕಲಾಪದ ವೇಳೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸೋನಿಯಾ ಜೊತೆ ಜಟಾಪಟಿ ನಡೆಸಿದ್ದರು. ಕಲಾಪ ಕೊನೆಗೊಂಡ ನಂತರವೂ ಸ್ಮೃತಿ ಹಾಗೂ ಬಿಜೆಪಿಯ ಇತರ ಸಂಸದರು ಸೋನಿಯಾ ಅವರನ್ನು ಲೇವಡಿ ಮಾಡಿದ್ದಾಗಿ ಆರೋಪಿಸಿರುವ ಕಾಂಗ್ರೆಸ್ ಸಂಸದರು, ಇದನ್ನೇ ದಾಳವಾಗಿಟ್ಟುಕೊಂಡು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುವ ನಿರೀಕ್ಷೆ ಇದೆ.