ಜಮ್ಮು: ಅಂತರರಾಷ್ಟ್ರೀಯ ಗಡಿಯಲ್ಲಿ ಅವಿತಿದ್ದ ಉಗ್ರರು ಮಂಗಳವಾರ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್ಎಫ್ನ ಸಹಾಯಕ ಕಮಾಂಡೆಂಟ್ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ.
ಪಾಕಿಸ್ತಾನ ಯೋಧರು ರಜೋರಿಯಲ್ಲಿ ದಾಳಿ ನಡೆಸುವ ಮೂಲಕ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದಾರೆ. ಭಾರತದ ಯೋಧರು ಸಹ ಪ್ರತಿ ದಾಳಿ ನಡೆಸಿದ್ಧಾರೆ.
ಮಂಗಳವಾರ ಬೆಳಿಗ್ಗೆ 10.50ಕ್ಕೆ ಗಸ್ತು ನಡೆಸುತ್ತಿದ್ದ ಸಹಾಯಕ ಕಮಾಂಡೆಂಟ್ ವಿನಯ್ ಪ್ರಸಾದ್ ಮೇಲೆ ದಾಳಿ ನಡೆಸಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸಾತ್ವಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.