<p><strong>ಉತ್ತರಕಾಶಿ</strong>: ಮೇಘಸ್ಫೋಟದಿಂದ ಖೀರಗಂಗಾ ನದಿಯಲ್ಲಿ ಮಂಗಳವಾರ ಉಂಟಾದ ಹಠಾತ್ ಪ್ರವಾಹಕ್ಕೆ ಹಲವಾರು ಮನೆಗಳು ಕೊಚ್ಚಿಕೊಂಡು ಹೋಗಿವೆ. ಕೆಸರಿನಡಿಯಲ್ಲಿ ಇಲ್ಲಿನ ಪ್ರಾಚೀನ ಕಲ್ಪ ಕೇದಾರ ದೇವಾಲಯವು ಹೂತು ಹೋಗಿದೆ.</p><p>ಹಲವಾರು ವರ್ಷಗಳಿಂದ ನೆಲದಡಿಯಲ್ಲಿ ಹೂತು ಹೋಗಿದ್ದ ಈ ದೇವಾಲಯವು 1945ರಲ್ಲಿ ನಡೆದ ಉತ್ಖನನದಲ್ಲಿ ಪತ್ತೆಯಾಗಿತ್ತು. ಹಲವಾರು ಅಡಿ ನೆಲ ಅಗೆದ ನಂತರ ಕೇದರನಾಥ ದೇವಾಲಯವನ್ನೇ ಹೋಲುವ ಪ್ರಾಚೀನ ದೇವಾಲಯವು ಪತ್ತೆಯಾಗಿತ್ತು.</p><p>ನೆಲಮಟ್ಟಕ್ಕಿಂತ ಕೆಳಗಿರುವ ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಕೆಳಗೆ ಇಳಿದು ಹೋಗಬೇಕಾಗಿತ್ತು. ಖೀರಗಂಗಾದಿಂದ ಸ್ವಲ್ಪ ನೀರು ಆಗಾಗ್ಗೆ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾದ ಶಿವಲಿಂಗದ ಮೇಲೆ ಹರಿಯುತ್ತಿತ್ತು. ದೇವಾಲಯದ ಹೊರಗೆ ಕಲ್ಲಿನ ಕೆತ್ತನೆಗಳಿವೆ.</p><p>ಕತುರೆ ಶೈಲಿಯಲ್ಲಿ ನಿರ್ಮಿಸಲಾದ ಈ ಶಿವ ದೇವಾಲಯದ ವಾಸ್ತುಶಿಲ್ಪವು ಕೇದಾರನಾಥ ಧಾಮದ ವಾಸ್ತುಶಿಲ್ಪವನ್ನು ಹೋಲುತ್ತದೆ.</p><p>ಏತನ್ಮಧ್ಯೆ, ಪ್ರವಾಹದಿಂದ ಇದುವರೆಗೆ ಐವರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರವಾಸಿಗರು ಸೇರಿ 100ಕ್ಕೂ ಹೆಚ್ಚು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿರಬಹುದು ಎಂದು ಮೂಲಗಳು ತಿಳಿಸಿವೆ.</p><p>20–25 ಹೋಟೆಲ್ಗಳು/ಹೋಂ ಸ್ಟೇಗಳು ಕೊಚ್ಚಿಕೊಂಡು ಹೋಗಿವೆ. ಇಂಡೊ–ಟಿಬೆಟ್ ಗಡಿ ಪೊಲೀಸ್ನ (ಐಟಿಬಿಪಿ) ಪಡೆಯ 16 ಸದಸ್ಯರಿರುವ ತಂಡ ಧಾರಾಲಿಗೆ ತೆರಳಿ ರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉತ್ತರಕಾಶಿ</strong>: ಮೇಘಸ್ಫೋಟದಿಂದ ಖೀರಗಂಗಾ ನದಿಯಲ್ಲಿ ಮಂಗಳವಾರ ಉಂಟಾದ ಹಠಾತ್ ಪ್ರವಾಹಕ್ಕೆ ಹಲವಾರು ಮನೆಗಳು ಕೊಚ್ಚಿಕೊಂಡು ಹೋಗಿವೆ. ಕೆಸರಿನಡಿಯಲ್ಲಿ ಇಲ್ಲಿನ ಪ್ರಾಚೀನ ಕಲ್ಪ ಕೇದಾರ ದೇವಾಲಯವು ಹೂತು ಹೋಗಿದೆ.</p><p>ಹಲವಾರು ವರ್ಷಗಳಿಂದ ನೆಲದಡಿಯಲ್ಲಿ ಹೂತು ಹೋಗಿದ್ದ ಈ ದೇವಾಲಯವು 1945ರಲ್ಲಿ ನಡೆದ ಉತ್ಖನನದಲ್ಲಿ ಪತ್ತೆಯಾಗಿತ್ತು. ಹಲವಾರು ಅಡಿ ನೆಲ ಅಗೆದ ನಂತರ ಕೇದರನಾಥ ದೇವಾಲಯವನ್ನೇ ಹೋಲುವ ಪ್ರಾಚೀನ ದೇವಾಲಯವು ಪತ್ತೆಯಾಗಿತ್ತು.</p><p>ನೆಲಮಟ್ಟಕ್ಕಿಂತ ಕೆಳಗಿರುವ ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಕೆಳಗೆ ಇಳಿದು ಹೋಗಬೇಕಾಗಿತ್ತು. ಖೀರಗಂಗಾದಿಂದ ಸ್ವಲ್ಪ ನೀರು ಆಗಾಗ್ಗೆ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾದ ಶಿವಲಿಂಗದ ಮೇಲೆ ಹರಿಯುತ್ತಿತ್ತು. ದೇವಾಲಯದ ಹೊರಗೆ ಕಲ್ಲಿನ ಕೆತ್ತನೆಗಳಿವೆ.</p><p>ಕತುರೆ ಶೈಲಿಯಲ್ಲಿ ನಿರ್ಮಿಸಲಾದ ಈ ಶಿವ ದೇವಾಲಯದ ವಾಸ್ತುಶಿಲ್ಪವು ಕೇದಾರನಾಥ ಧಾಮದ ವಾಸ್ತುಶಿಲ್ಪವನ್ನು ಹೋಲುತ್ತದೆ.</p><p>ಏತನ್ಮಧ್ಯೆ, ಪ್ರವಾಹದಿಂದ ಇದುವರೆಗೆ ಐವರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರವಾಸಿಗರು ಸೇರಿ 100ಕ್ಕೂ ಹೆಚ್ಚು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿರಬಹುದು ಎಂದು ಮೂಲಗಳು ತಿಳಿಸಿವೆ.</p><p>20–25 ಹೋಟೆಲ್ಗಳು/ಹೋಂ ಸ್ಟೇಗಳು ಕೊಚ್ಚಿಕೊಂಡು ಹೋಗಿವೆ. ಇಂಡೊ–ಟಿಬೆಟ್ ಗಡಿ ಪೊಲೀಸ್ನ (ಐಟಿಬಿಪಿ) ಪಡೆಯ 16 ಸದಸ್ಯರಿರುವ ತಂಡ ಧಾರಾಲಿಗೆ ತೆರಳಿ ರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>