ಅಮರಾವತಿ (ಪಿಟಿಐ): ಮಹಾರಾಷ್ಟ್ರದ ಅಮರಾವತಿಯ ಔಷಧ ವ್ಯಾಪಾರಿ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಅವರ ಹತ್ಯೆಯ ಸಂಚುಕೋರ ಎಂದು ಹೇಳಲಾದ ಇರ್ಫಾನ್ ಖಾನ್ ಸರ್ಕಾರೇತರ ಸಂಸ್ಥೆ (ಎನ್ಜಿಒ)‘ರಹ್ಬಾರ್’ ನಿರ್ದೇಶಕನಾಗಿದ್ದು, ಪೊಲೀಸರು ಸಂಘಟನೆಯ ಬ್ಯಾಂಕ್ ಖಾತೆಯ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.