ಅನಿಲ್ ಸಿಹಾಗ್ ಮತ್ತು ರಾಕೇಶ್ ಸಿಹಾಗ್ ಅವರು ಮೇ 24 ರಂದು ವಿನೋದ್ ಬಾಮ್ನಿಯಾ ಅವರ ಮನೆಯ ಹೊರಗೆ ಹಾಕಿದ್ದ ಪೋಸ್ಟರ್ ಅನ್ನು ಹರಿದು ಹಾಕಿದ್ದರು. ಬಾಮ್ನಿಯಾ ಹಾಗೂ ಅವರ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ ನಂತರ, ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಗೆಹರಿಸಲು ಮುಂದಾಗಿದ್ದರು. ಹತ್ಯೆ ಮಾಡಿದ ಆರೋಪಿಗಳ ಕುಟುಂಬ ಸದಸ್ಯರು ಅದೇ ದಿನ ಅವರ ಪರವಾಗಿ ಕ್ಷಮೆಯಾಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅನಿಲ್ ಹಾಗೂ ರಾಕೇಶ್ ಇತರ ನಾಲ್ವರ ಬೆಂಬಲಿಗರೊಂದಿಗೆ ಜೂನ್ 5 ರಂದು ಬಾಮ್ನಿಯಾ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವಿನೋದ್ ಬಾಮ್ನಿಯಾ ಚಿಕಿತ್ಸೆಗೆ ಸ್ಪಂದಿಸದೇ ಜೂನ್ 7 ರಂದು ಮೃತಪಟ್ಟಿದ್ದಾರೆ.