<p><strong>ಸಂಭಲ್ :</strong> ಉತ್ತರ ಪ್ರದೇಶದ ಸಂಭಲ್ನಲ್ಲಿ 46 ವರ್ಷಗಳ ಬಳಿಕ ಬಾಗಿಲು ತೆರೆಯಲಾಗಿರುವ ಭಸ್ಮ ಶಂಕರ್ ದೇವಾಲಯದ ಬಾವಿಯೊಳಗೆ ದೇವರ ಮೂರು ಭಗ್ನ ಮೂರ್ತಿಗಳು ಪತ್ತೆಯಾಗಿವೆ.</p>.<p>ಡಿ. 13ರಂದು ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ‘ಶ್ರೀ ಕಾರ್ತೀಕ ಮಹಾದೇವ ದೇಗುಲ’ (ಭಸ್ಮ ಶಂಕರ್ ದೇಗುಲ) ಮತ್ತು ಅದರ ಸಮೀಪ ಬಾವಿ ಪತ್ತೆಯಾಗಿತ್ತು. ದೇವಾಲಯದಲ್ಲಿ ಹನುಮ ಮೂರ್ತಿ ಮತ್ತು ಶಿವಲಿಂಗ ನೆಲೆಸಿವೆ. 1978ರಿಂದ ಈ ದೇಗುಲ ಬಾಗಿಲು ಮುಚ್ಚಿತ್ತು.</p>.<p>‘ದೇವಾಲಯ ಮತ್ತು ಅದರ ಬಳಿಯ ಬಾವಿಯಲ್ಲಿ ಉತ್ಖನನ ನಡೆಸಲಾಗುತ್ತಿದೆ. ಈ ವೇಳೆ ಬಾವಿಯಲ್ಲಿ 10ರಿಂದ 12 ಅಡಿ ಅಗೆದ ಬಳಿಕ ಮೂರು ಮೂರ್ತಿಗಳು ಪತ್ತೆಯಾಗಿವೆ. ಅದರಲ್ಲಿ ಮೊದಲಿಗೆ ರುಂಡ ಬೇರ್ಪಟ್ಟಿರುವ ಪಾರ್ವತಿ ಮೂರ್ತಿ, ಬಳಿಕ ಗಣೇಶ ಮತ್ತು ಲಕ್ಷ್ಮಿ ಮೂರ್ತಿಗಳು ಪತ್ತೆಯಾದವು ಎಂದು ಸಂಭಲ್ನ ಜಿಲ್ಲಾಧಿಕಾರಿ ರಾಜೇಂದರ್ ಪೆನ್ಸಿಯಾ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಈ ಮೂರ್ತಿಗಳು ಬಾವಿಯೊಳಗೆ ಹೇಗೆ ಬಂದವು. ಅವು ಯಾವ ಕಾಲದವು ಮತ್ತು ಹೇಗೆ ಭಗ್ನವಾದವು ಎಂಬುದು ತನಿಖೆಯ ಬಳಿಕ ಗೊತ್ತಾಗುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.</p>.<p>‘ದೇಗುಲದ ಸುತ್ತಮುತ್ತಲಿನ ಒತ್ತುವರಿಗಳನ್ನು ಕೆಲವರು ತಾವಾಗಿಯೇ ತೆರವುಗೊಳಿಸಿದ್ದಾರೆ. ಇನ್ನೂ ಕೆಲವರಿಗೆ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಈ ಕುರಿತು ಮುಂದಿನ ಪ್ರಕ್ರಿಯೆಗಳನ್ನು ಪಾಲಿಕೆ ಮಾಡುತ್ತದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಭಲ್ :</strong> ಉತ್ತರ ಪ್ರದೇಶದ ಸಂಭಲ್ನಲ್ಲಿ 46 ವರ್ಷಗಳ ಬಳಿಕ ಬಾಗಿಲು ತೆರೆಯಲಾಗಿರುವ ಭಸ್ಮ ಶಂಕರ್ ದೇವಾಲಯದ ಬಾವಿಯೊಳಗೆ ದೇವರ ಮೂರು ಭಗ್ನ ಮೂರ್ತಿಗಳು ಪತ್ತೆಯಾಗಿವೆ.</p>.<p>ಡಿ. 13ರಂದು ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ‘ಶ್ರೀ ಕಾರ್ತೀಕ ಮಹಾದೇವ ದೇಗುಲ’ (ಭಸ್ಮ ಶಂಕರ್ ದೇಗುಲ) ಮತ್ತು ಅದರ ಸಮೀಪ ಬಾವಿ ಪತ್ತೆಯಾಗಿತ್ತು. ದೇವಾಲಯದಲ್ಲಿ ಹನುಮ ಮೂರ್ತಿ ಮತ್ತು ಶಿವಲಿಂಗ ನೆಲೆಸಿವೆ. 1978ರಿಂದ ಈ ದೇಗುಲ ಬಾಗಿಲು ಮುಚ್ಚಿತ್ತು.</p>.<p>‘ದೇವಾಲಯ ಮತ್ತು ಅದರ ಬಳಿಯ ಬಾವಿಯಲ್ಲಿ ಉತ್ಖನನ ನಡೆಸಲಾಗುತ್ತಿದೆ. ಈ ವೇಳೆ ಬಾವಿಯಲ್ಲಿ 10ರಿಂದ 12 ಅಡಿ ಅಗೆದ ಬಳಿಕ ಮೂರು ಮೂರ್ತಿಗಳು ಪತ್ತೆಯಾಗಿವೆ. ಅದರಲ್ಲಿ ಮೊದಲಿಗೆ ರುಂಡ ಬೇರ್ಪಟ್ಟಿರುವ ಪಾರ್ವತಿ ಮೂರ್ತಿ, ಬಳಿಕ ಗಣೇಶ ಮತ್ತು ಲಕ್ಷ್ಮಿ ಮೂರ್ತಿಗಳು ಪತ್ತೆಯಾದವು ಎಂದು ಸಂಭಲ್ನ ಜಿಲ್ಲಾಧಿಕಾರಿ ರಾಜೇಂದರ್ ಪೆನ್ಸಿಯಾ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಈ ಮೂರ್ತಿಗಳು ಬಾವಿಯೊಳಗೆ ಹೇಗೆ ಬಂದವು. ಅವು ಯಾವ ಕಾಲದವು ಮತ್ತು ಹೇಗೆ ಭಗ್ನವಾದವು ಎಂಬುದು ತನಿಖೆಯ ಬಳಿಕ ಗೊತ್ತಾಗುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.</p>.<p>‘ದೇಗುಲದ ಸುತ್ತಮುತ್ತಲಿನ ಒತ್ತುವರಿಗಳನ್ನು ಕೆಲವರು ತಾವಾಗಿಯೇ ತೆರವುಗೊಳಿಸಿದ್ದಾರೆ. ಇನ್ನೂ ಕೆಲವರಿಗೆ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಈ ಕುರಿತು ಮುಂದಿನ ಪ್ರಕ್ರಿಯೆಗಳನ್ನು ಪಾಲಿಕೆ ಮಾಡುತ್ತದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>