<p><strong>ನವದೆಹಲಿ:</strong> ಮಳೆಯಿಂದಾಗಿ ಇಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಚಾವಣಿಯ ಭಾಗವೊಂದು ಕುಸಿದ ಕಾರಣ ಮೃತಪಟ್ಟ ಕ್ಯಾಬ್ ಚಾಲಕನ ಕುಟುಂಬವು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವ ಕುರಿತು ನಿರ್ಧರಿಸುವುದಾಗಿ ಶನಿವಾರ ಹೇಳಿದೆ.</p>.<p>ಮೃತ ಚಾಲಕ ರಮೇಶ್ ಕುಮಾರ್ (45) ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. </p>.<p>‘3.30ಕ್ಕೆ ನಮ್ಮ ತಂದೆಯ ಅಂತ್ಯಕ್ರಿಯೆ ನಡೆಸಲಾಗುವುದು. ಬಳಿಕ ಅವರ ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುವ ಕುರಿತು ತೀರ್ಮಾನಿಸಲಾಗುವುದು’ ಎಂದು ರಮೇಶ್ ಮಗ ರವೀಂದ್ರ (25) ತಿಳಿಸಿದರು. ಸರ್ಕಾರ ಘೋಷಿಸಿರುವ ಪರಿಹಾರ ಮೊತ್ತದ ಕುರಿತೂ ಅವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಶುಕ್ರವಾರ ಬೆಳಿಗ್ಗೆ ಟರ್ಮಿನಲ್– 1ರಲ್ಲಿ ರಮೇಶ್ ಅವರು ಪ್ರಯಾಣಿಕರಿಗಾಗಿ ಕಾಯುತ್ತಿದ್ದ ವೇಳೆ ಅವರ ವಾಹನದ ಮೇಲೆ ನಿಲ್ದಾಣದ ಚಾವಣಿಯ ಒಂದು ಭಾಗವು ಬಿದ್ದು ಅವರು ಮೃತಟ್ಟಿದ್ದರು. ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮಳೆಯಿಂದಾಗಿ ಇಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಚಾವಣಿಯ ಭಾಗವೊಂದು ಕುಸಿದ ಕಾರಣ ಮೃತಪಟ್ಟ ಕ್ಯಾಬ್ ಚಾಲಕನ ಕುಟುಂಬವು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವ ಕುರಿತು ನಿರ್ಧರಿಸುವುದಾಗಿ ಶನಿವಾರ ಹೇಳಿದೆ.</p>.<p>ಮೃತ ಚಾಲಕ ರಮೇಶ್ ಕುಮಾರ್ (45) ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. </p>.<p>‘3.30ಕ್ಕೆ ನಮ್ಮ ತಂದೆಯ ಅಂತ್ಯಕ್ರಿಯೆ ನಡೆಸಲಾಗುವುದು. ಬಳಿಕ ಅವರ ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುವ ಕುರಿತು ತೀರ್ಮಾನಿಸಲಾಗುವುದು’ ಎಂದು ರಮೇಶ್ ಮಗ ರವೀಂದ್ರ (25) ತಿಳಿಸಿದರು. ಸರ್ಕಾರ ಘೋಷಿಸಿರುವ ಪರಿಹಾರ ಮೊತ್ತದ ಕುರಿತೂ ಅವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಶುಕ್ರವಾರ ಬೆಳಿಗ್ಗೆ ಟರ್ಮಿನಲ್– 1ರಲ್ಲಿ ರಮೇಶ್ ಅವರು ಪ್ರಯಾಣಿಕರಿಗಾಗಿ ಕಾಯುತ್ತಿದ್ದ ವೇಳೆ ಅವರ ವಾಹನದ ಮೇಲೆ ನಿಲ್ದಾಣದ ಚಾವಣಿಯ ಒಂದು ಭಾಗವು ಬಿದ್ದು ಅವರು ಮೃತಟ್ಟಿದ್ದರು. ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>