<p>ನವದೆಹಲಿ: ತುರ್ತು ಪರಿಸ್ಥಿತಿ ಜಾರಿಯಾಗಿ 50 ವರ್ಷವಾಗಿರುವ ಪ್ರಯುಕ್ತ ದೆಹಲಿ ವಿಧಾನಸಭೆಯು ವಿಶೇಷ ವಿಚಾರ ಸಂಕಿರಣ ಆಯೋಜಿಸಿದೆ. ವಿಧಾನಸಭೆಯ ಆವರಣದಲ್ಲಿ ಶನಿವಾರ ಈ ಕಾರ್ಯಕ್ರಮ ನಡೆಯಲಿದೆ ಎಂದು ದೆಹಲಿ ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. </p>.<p>ಸಂವಿಧಾನ ಹತ್ಯಾ ದಿವಸ ಎಂಬ ವಿಚಾರದ ಅನ್ವಯ ‘ ಭಾರತೀಯ ಲೋಕತಂತ್ರ ಹಾಗೂ ಸಂವಿಧಾನದ ಅತ್ಯಂತ ಅಂಧಕಾರದ ಅವಧಿ: ಮರೆಯುವುದೂ ಇಲ್ಲ, ಕ್ಷಮಿಸುವುದೂ ಇಲ್ಲ’ ಎಂಬ ಶೀರ್ಷಿಕಯ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.</p>.<p>ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಕೇಂದ್ರದ ಮಾಜಿ ಸಚಿವ ಸತ್ಯನಾರಾಯಣ ಜತಿಯಾ ಸೇರಿದಂತೆ ಹಲವು ಗಣ್ಯರು ವಿಚಾರ ಸಂಕಿರಣದಲ್ಲಿ ಭಾಗಿಯಾಗಲಿದ್ದಾರೆ.</p>.<p>ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ಎಂದು ಪರಿಗಣಿಸುವ ಅವಧಿಯ ಕುರಿತು ರಾಷ್ಟ್ರೀಯ ಆತ್ಮಾವಲೋಕನಕ್ಕೆ ಈ ಕಾರ್ಯಕ್ರಮ ಅನುವಾಗಲಿದೆ. ತುರ್ತು ಪರಿಸ್ಥಿತಿಗೆ ಪ್ರತಿರೋಧ ಒಡ್ಡಿದವರನ್ನು ಸ್ಮರಿಸುವುದು ಮಾತ್ರವಲ್ಲದೇ, ಭವಿಷ್ಯದ ಪೀಳಿಗೆಗೆ ಸಂವಿಧಾನದ ಮೌಲ್ಯಗಳು, ನಾಗರಿಕ ಹಕ್ಕುಗಳ ರಕ್ಷಣೆ ಕುರಿತಂತೆ ಜಾಗೃತವಾಗಿರುವ ಬಗ್ಗೆ ಕಾರ್ಯಕ್ರಮ ಸಂದೇಶ ನೀಡಲಿದೆ ಎಂದು ಸ್ಪೀಕರ್ ವಿಜೇಂದ್ರ ಗುಪ್ತಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ತುರ್ತು ಪರಿಸ್ಥಿತಿ ಜಾರಿಯಾಗಿ 50 ವರ್ಷವಾಗಿರುವ ಪ್ರಯುಕ್ತ ದೆಹಲಿ ವಿಧಾನಸಭೆಯು ವಿಶೇಷ ವಿಚಾರ ಸಂಕಿರಣ ಆಯೋಜಿಸಿದೆ. ವಿಧಾನಸಭೆಯ ಆವರಣದಲ್ಲಿ ಶನಿವಾರ ಈ ಕಾರ್ಯಕ್ರಮ ನಡೆಯಲಿದೆ ಎಂದು ದೆಹಲಿ ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. </p>.<p>ಸಂವಿಧಾನ ಹತ್ಯಾ ದಿವಸ ಎಂಬ ವಿಚಾರದ ಅನ್ವಯ ‘ ಭಾರತೀಯ ಲೋಕತಂತ್ರ ಹಾಗೂ ಸಂವಿಧಾನದ ಅತ್ಯಂತ ಅಂಧಕಾರದ ಅವಧಿ: ಮರೆಯುವುದೂ ಇಲ್ಲ, ಕ್ಷಮಿಸುವುದೂ ಇಲ್ಲ’ ಎಂಬ ಶೀರ್ಷಿಕಯ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.</p>.<p>ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಕೇಂದ್ರದ ಮಾಜಿ ಸಚಿವ ಸತ್ಯನಾರಾಯಣ ಜತಿಯಾ ಸೇರಿದಂತೆ ಹಲವು ಗಣ್ಯರು ವಿಚಾರ ಸಂಕಿರಣದಲ್ಲಿ ಭಾಗಿಯಾಗಲಿದ್ದಾರೆ.</p>.<p>ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ಎಂದು ಪರಿಗಣಿಸುವ ಅವಧಿಯ ಕುರಿತು ರಾಷ್ಟ್ರೀಯ ಆತ್ಮಾವಲೋಕನಕ್ಕೆ ಈ ಕಾರ್ಯಕ್ರಮ ಅನುವಾಗಲಿದೆ. ತುರ್ತು ಪರಿಸ್ಥಿತಿಗೆ ಪ್ರತಿರೋಧ ಒಡ್ಡಿದವರನ್ನು ಸ್ಮರಿಸುವುದು ಮಾತ್ರವಲ್ಲದೇ, ಭವಿಷ್ಯದ ಪೀಳಿಗೆಗೆ ಸಂವಿಧಾನದ ಮೌಲ್ಯಗಳು, ನಾಗರಿಕ ಹಕ್ಕುಗಳ ರಕ್ಷಣೆ ಕುರಿತಂತೆ ಜಾಗೃತವಾಗಿರುವ ಬಗ್ಗೆ ಕಾರ್ಯಕ್ರಮ ಸಂದೇಶ ನೀಡಲಿದೆ ಎಂದು ಸ್ಪೀಕರ್ ವಿಜೇಂದ್ರ ಗುಪ್ತಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>