ಅನರ್ಹ ಶಾಸಕರ ಅರ್ಜಿ ಕುರಿತು ಈಗಾಗಲೇ ವಾದ ಪ್ರತಿವಾದ ಮುಗಿದಿದ್ದು, ತೀರ್ಪು ಪ್ರಕಟಣೆ ಮಾತ್ರ ಬಾಕಿ ಇದೆ. ತೀರ್ಪು ಪ್ರಕಟಣೆಗಾಗಿ ಕರ್ನಾಟಕದ ಅನರ್ಹ ಶಾಸಕರು ಕಾದಿದ್ದು, ತೀರ್ಪಿನ ಆಧಾರದ ಮೇಲೆ ಅನರ್ಹ ಶಾಸಕರ ಮುಂದಿನ ರಾಜಕೀಯ ನಡೆ ನಿರ್ಧಾರವಾಗಲಿದೆ. ರಾಜಕೀಯವಾಗಿಯೂ ಇದು ಅತ್ಯಂತ ಮಹತ್ವದ ತೀರ್ಪು ಎನಿಸಿಕೊಳ್ಳಲಿದೆ.