‘ಧರ್ಮ, ಜನಾಂಗ, ಜಾತಿ ಅಥವಾ ಜನಿಸಿದ ಸ್ಥಳದ ಆಧಾರದ ಮೇಲೆ ಪಕ್ಷಪಾತ ಮಾಡುವುದನ್ನು ಭಾರತೀಯ ಸಂವಿಧಾನ ನಿಷೇಧಿಸಿದೆ. ಸಚಿವಾಲಯವು 2016ರಲ್ಲಿ ‘ಮಾದರಿ ಜೈಲು ಕೈಪಿಡಿ’ ಸಿದ್ಧಪಡಿಸಿ, ಅದನ್ನು ಅದೇ ವರ್ಷ ಮೇನಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಿದೆ. ಕೈದಿಗಳಿಗೆ ಜೈಲುಗಳಲ್ಲಿನ ಕೆಲಸ ವಹಿಸುವ ವೇಳೆ ಧರ್ಮ, ಜಾತಿ ಆಧಾರದಲ್ಲಿ ಪಕ್ಷಪಾತ ಮಾಡುವುದನ್ನು ಕೈಪಿಡಿಯಲ್ಲಿನ ಮಾರ್ಗಸೂಚಿಗಳು ಸ್ಪಷ್ಟವಾಗಿ ನಿಷೇಧಿಸುತ್ತವೆ’ ಎಂದು ವಿವರಿಸಲಾಗಿದೆ.