ಮುಂಬೈ: ‘ಮಹಾರಾಷ್ಟ್ರದಲ್ಲಿ ಪ್ರತಿದಿನ ಮೂವತ್ತು ಮಕ್ಕಳನ್ನು ಅಪಹರಣ ಮಾಡಲಾಗುತ್ತಿದೆ’ ಎಂದುಗೃಹ ಸಚಿವ ಅನಿಲ್ ದೇಶ್ಮುಖ್ ವಿಧಾನ ಪರಿಷತ್ತಿಗೆಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಅಪಹರಣಕ್ಕೊಳಗಾಗುವ ಮಕ್ಕಳಲ್ಲಿ ಶೇ 72ರಷ್ಟು ಬಾಲಕಿಯರು’ ಎಂದಿರುವ ಅವರು, ‘ಆಂಧ್ರಪ್ರದೇಶದ ದಿಶಾ ಕಾಯ್ದೆ ಮಾದರಿಯಲ್ಲಿಯೇ ರಾಜ್ಯದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ವಿಶೇಷ ಕಾಯ್ದೆ ಜಾರಿಗೊಳಿಸುವ ಯೋಜನೆಯಿದೆ’ ಎಂದರು.