‘ಕೋರ್ಟ್ನ ರಿಜಿಸ್ಟ್ರಿಗೆ ಹಲವು ಪತ್ರಗಳನ್ನು ರವಾನಿಸಲಾಗಿದೆ. ಪ್ರಕರಣವನ್ನು ಬೇರೆಡೆ ವರ್ಗಾವಣೆ ಮಾಡಿದ್ದು ಏಕೆ ಎಂದು ಪ್ರಶ್ನಿಸಲಾಗಿದೆ. ನಾನು ಅದಕ್ಕೆ ಕಾರಣವನ್ನು ಹೇಳುತ್ತೇನೆ. ಪತ್ರ ರವಾನಿಸುವುದು, ಆರೋಪ ಮಾಡುವುದು ಬಹಳ ಸುಲಭ... ನ್ಯಾಯಮೂರ್ತಿ ಬೋಪಣ್ಣ ಅವರ ಕಚೇರಿಯಿಂದ ಸಂದೇಶವೊಂದು ಬಂದಿತ್ತು... ವೈದ್ಯಕೀಯ ಕಾರಣಗಳಿಂದಾಗಿ ಅವರು ದೀಪಾವಳಿ ನಂತರ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಹೀಗಾಗಿ ಈ ಪ್ರಕರಣವನ್ನು ನ್ಯಾಯಮೂರ್ತಿ ಬೇಲಾ ಅವರಿಗೆ ವಹಿಸಲಾಯಿತು. ಅವರು ಮೊದಲು ಈ ಪ್ರಕರಣದ ವಿಚಾರಣೆ ನಡೆಸಿದ ಪೀಠದಲ್ಲಿ ಇದ್ದರು’ ಎಂದು ಸಿಜೆಐ ವಿವರಿಸಿದರು.