ಪಟ್ನಾ: ಬಿಜೆಪಿ ಮಾಜಿ ಸಂಸದ ಉದಯ್ ಸಿಂಗ್ ಅವರು ಪಕ್ಷದ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ಮಹಾಮೈತ್ರಿ ಕಡೆಗೆ ಒಲವು ತೋರಿರುವ ಅವರು, ಕಾಂಗ್ರೆಸ್ ಅಥವಾ ರಾಷ್ಟ್ರೀಯ ಜನತಾ ದಳದಿಂದ (ಆರ್ಜೆಡಿ) ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
‘ಸಂಯುಕ್ತ ಜನತಾ ದಳ (ಜೆಡಿಯು) ಮುಖ್ಯಸ್ಥ ನಿತೀಶ್ ಕುಮಾರ್ ಅವರಿಗೆ ಬಿಜೆಪಿ ಶರಣಾಗಿದೆ’ ಎಂದು ಎರಡು ಬಾರಿ ಸಂಸದರಾಗಿದ್ದ ಸಿಂಗ್ ಆರೋಪಿಸಿದ್ದಾರೆ.
‘ಬೆಂಬಲಿಗರ ಜತೆಗೆ ಚರ್ಚಿಸಿದ ನಂತರ ರಾಹುಲ್ ಗಾಂಧಿ ಹಾಗೂ ಲಾಲು ಪ್ರಸಾದ್ ಅವರ ಜತೆಗೆ ಚರ್ಚಿಸುತ್ತೇನೆ. ಈವರೆಗೆ ಯಾವುದೇ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿಲ್ಲ. ಆದರೆ, ಮಹಾಮೈತ್ರಿಯ ಭಾಗವಾಗುತ್ತೇನೆ’ ಎಂದು ಅವರು ಹೇಳಿದ್ದಾರೆ.