‘ದೀಪಾವಳಿಗೂ ಮುನ್ನ ಯುವತಿಯ ತಾಯಿ ನಮ್ಮ ತಂದೆಗೆ₹30,000 ಸಾಲ ಕೊಡಿಸಿದ್ದರು. ಇದಕ್ಕೆ ಪ್ರತಿಯಾಗಿ ₹ 2,000 ಕಮಿಷನ್ ಕೇಳಿದ್ದರು. ಹಣ ನೀಡಲು ನಮ್ಮ ತಂದೆ ಒಪ್ಪಿರಲಿಲ್ಲ. ಈ ವಿಚಾರವಾಗಿ ಎರಡೂ ಕುಟುಂಬದವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಯುವತಿಯ ಮನೆಯವರ ಕರೆಯ ಮೇರೆಗೆ ಶನಿವಾರ ಮಧ್ಯಾಹ್ನ ಅವರ ಮನೆಗೆ ಹೋಗಿದ್ದೆ. ಈ ವೇಳೆ ನನ್ನ ಹಾಗೂ ಯುವತಿಯ ತಂದೆಯ ನಡುವೆ ವಾಗ್ವಾದ ನಡೆಯಿತು ಎಂದು ಆರೋಪಿಯು ವಿಚಾರಣೆ ವೇಳೆ ತಿಳಿಸಿದ್ದಾರೆ’ ಎಂದೂ ಸಂತೋಷ್ ಕುಮಾರ್ ಮಾಹಿತಿ ನೀಡಿದ್ದಾರೆ.