ನವದೆಹಲಿ: ‘ಸರ್ಕಾರವು ಇತಿಹಾಸವನ್ನು ಬದಲಾಯಿಸುವುದಿಲ್ಲ ಅಥವಾ ಪುನರ್ರಚಿಸುವುದಿಲ್ಲ. ಆದರೆ ಎಲ್ಲಾ ಐತಿಹಾಸಿಕ ಸತ್ಯಗಳನ್ನು ಹೊರತರಲು ತೆರೆಮರೆಗೆ ಸರಿದ ನಾಯಕರನ್ನೂ ಸೇರಿಸುತ್ತೇವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಶತಮಾನಗಳಿಂದಲೂ ಲಕ್ಷಾಂತರ ಮಂದಿ ದೇಶದ ನಾಗರಿಕತೆಯನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಆದರೆ, ಅದು ನಮ್ಮ ಇತಿಹಾಸದ ಭಾಗವಾಗಲಿಲ್ಲ ಎಂದಿದ್ದಾರೆ.