ನಗರದಲ್ಲಿ ನಡೆದ ಸಾರ್ವಜನಿಕೆ ಸಭೆಯಲ್ಲಿ ಮಾತನಾಡಿದ ಮಮತಾ, ʼಮೋದಿ ಸಿಂಡಿಕೇಟ್ 1 ಮತ್ತು ಅಮಿತ್ ಶಾ ಸಿಂಡಿಕೇಟ್ 2. ಅವರು ಅಭಿಷೇಕ್, ಸುದೀಪ್ ಮತ್ತು ಸ್ಟಾಲಿನ್ ಮಗಳ ಮನೆಗಳಿಗೆ ಏಜೆನ್ಸಿಗಳನ್ನು ಕಳುಹಿಸುತ್ತಾರೆ. ಅವರು ನಿರಂತರವಾಗಿ ಪೊಲೀಸ್ ಅಧಿಕಾರಿಗಳನ್ನು ಬದಲಿಸುತ್ತಾರೆ. ಗುಜರಾತಿಗಳು ಉತ್ತರ ಪ್ರದೇಶ ಮತ್ತು ಬಿಹಾರದಿಂದ ಗೂಂಡಾಗಳನ್ನು ಕರೆತರುವ ಮೂಲಕಬಂಗಾಳವನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯು ಕೋಮು ಗೊಂದಲನ್ನು ಸೃಷ್ಟಿಸಲುಪ್ರಯತ್ನಿಸುತ್ತಿದೆ. ನಾವು ಬಂಗಾಳವನ್ನು ಗುಜರಾತ್ ಆಗಲು ಬಿಡುವುದಿಲ್ಲʼ ಎಂದು ಕಿಡಿಕಾರಿದ್ದಾರೆ.