‘ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ಆರೋಪಿಯ ಸಹಚರರಿಂದ ವಶಕ್ಕೆ ಪಡೆಯಲಾಗುವುದು. ಪಾತಕಿಗಳ ಗುಂಪಿನೊಂದಿಗೆ ಮಾನೇಸರ್ ನಂಟು ಹೊಂದಿದ್ದಾರೆಯೇ ಎಂಬ ಆಯಾಮದಲ್ಲೂ ವಿಚಾರಣೆ ನಡೆಸಬೇಕಿದೆ. ಹೀಗಾಗಿ ಏಳು ದಿನ ಆರೋಪಿಯನ್ನು ವಶಕ್ಕೆ ನೀಡಬೇಕು ಎಂದು ಗುರುಗ್ರಾಮ ಪೊಲೀಸರು ಮನವಿ ಮಾಡಿದರು. ಆದರೆ ಕೋರ್ಟ್ ನಾಲ್ಕು ದಿನ ಮಾತ್ರ ವಶಕ್ಕೆ ನೀಡಿತು’ ಎಂದು ಮಾನೇಸರ್ ಪರ ವಕೀಲ ವಕೀಲ ಕುಲಭೂಷಣ್ ಭಾರದ್ವಾಜ್ ತಿಳಿಸಿದರು.